Friday 13 January 2012

Political drama

ಕುರ್ಚಿ ಅಳ್ಳಾಡ್ತಾ ಇದ್ರೂನು
ಮಳೆ ಹೊಡ್ಕಂಡ್ ಕುಂತವ್ರೆ
ಸಿಕ್ಕಾಪಟ್ಟೆ ಕಷ್ಟ ಪಟ್ಟು
ಆಸ್ತಿ ಮಾಡ್ಕೊಂತಾ ಅವ್ರೆ...

... ಜನ ಬೀದೀಲ್ ಬಾಯ್ ಬಾಯ್
ಬಡ್ಕ್ಂಡ್ರೊ,ಮೂಸ್ ನೋಡೋರಿಲರಪ್ಪೋ
ತಿನ್ನೋಕ್ ಉಣ್ಣೋಕ್ ಇಲ್ಲಾ ಅಂದ್ರು
ತಂಗ್ಳು ಹಾಕೋರ್ ಇಲ್ರಪ್ಪೋ..

ಇವ್ರ ಹೆಂಡ್ರು ಮಕ್ಳ ಮ್ಯಾಲೆ
ನೊಡ್ರಿ ಚಿನ್ನದ್ ಸರಗಳು
ನಮ್ಮ ನಾಡಿನ ರೈತನ ಮೈಲಿ
ತ್ಯಾಪೆ ಹಾಕಿದ್ ಚಡ್ಡಿಗಳು..

ಸಹಾಯ ಇಲ್ದೆ ನೊವಿನಲ್ಲಿ
ಯಾವನ್ ಸತ್ರೆ ಇವ್ರ್ಗೆನೂ
ಹಾಡ ಹಗ್ಲೆ ದರೋಡೆ ಮಾಡಿದ್ರೊ
ಕೆಳೋರ್ ಇಲ್ಲ ಇವ್ರನ್ನು...

ಮ್ಯಾಲೆ ಕೆಳಗೆ ಮುಚ್ಕಂಡು
ಕೂರೋ ಜನ್ರೇ ಹೆಚ್ಚು ಇಲ್ಲೆಲ್ಲಾ
ನಮ್ಗ್ಯಾಕೆ ಊರ ಉಸಾಬ್ರಿ
ಅನ್ನೋ ನಪುಂಸಕ್ರೇ ಊರೆಲ್ಲಾ...

ಬದಲಾವಣೆಯ ಗಾಳಿ ತಂದ್ರೆ
ಉಸಿರುಗಟ್ಟಿಸಿ ಸಾಯಿಸ್ತಾರೆ
ಜೀವದ್ ಮ್ಯಾಲೆ ಆಸೆ ಇರೋರ್
ಸುಮ್ನೆ ಅಮಿಕ್ಕಂಡು ಕೂರ್ತಾರೆ...

ಯಾರೇ ಏನೇ ಬಡ್ಕ್ಂಡ್ರೊನು ಇಷ್ಟೇ
ಕಣ್ರೀ ನಮ್ ದೇಶ
ಅದ್ಯಾವಾಗ್ ಸಿಗತ್ತೋ ಈ ಶನಿಗಳಿಂದ
ದಿನಾಸಾಯೋ ನಮ್ಗೆಲ್ಲಾ ಮೋಕ್ಷ...
-ಸುಮ್ಮಿ♥♥♥

No comments:

Post a Comment